ವಿಜಯಪುರ ಜಿಲ್ಲೆಯಲ್ಲಿ ಭರಪೂರ ಮಳೆ, ರೈತಾಪಿ ವರ್ಗದಲ್ಲಿ ಸಂತಸದ ಹೊನಲು - ಮಳೆಯಿಂದ ವಾಹನ ಸವಾರರ ಪರದಾಟ
ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣ, ನೆಹರೂ ನಗರ,ಕೀರ್ತಿನಗರ, ಮನಗೂಳಿ ಅಗಸಿ, ಬಸವೇಶ್ವರ ವೃತ್ತ ಸೇರಿದಂತೆ ಹಲವು ಕಡೆ ಧಾರಾಕಾರವಾಗಿ ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಪಟ್ರು. ವಾಹನ ಸವಾರರು ಕೆಲಕಾಲ ಪರದಾಡುವಂತಾಯ್ತು. ಅನಿರೀಕ್ಷಿತ ಮಳೆ ಜಿಲ್ಲೆಯ ರೈತಾಪಿ ವರ್ಗದಲ್ಲಿ ಹರುಷ ತಂದಿದ್ದು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.