ಮಂಗಳೂರಿನಲ್ಲಿ ಭಾರೀ ಮಳೆ: ಜಲದಿಗ್ಬಂಧನದಲಿ ಸಿಲುಕಿದ ಗಂಗಾಧರೇಶ್ವರ...! - Flood in mangaluru
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕಡಬದ ಗಂಗಾಧರೇಶ್ವರ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ. ಕಡಬ ತಾಲೂಕಿನ ಇಚಿಲಂಪ್ಪಾಡಿಯ ಮಾನಡ್ಕ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಗಂಗಾಧರೇಶ್ವರ ದೇವಸ್ಥಾನ ಇದ್ದು, ಭಾರಿ ಮಳೆಯಿಂದ ಗುಂಡ್ಯ ಹೊಳೆಯ ನೆರೆ ದೇವಾಲಯದ ಸುತ್ತಲೂ ನೆರೆ ನೀರು ಬಂದಿದೆ. ಇದರ ಜೊತೆಗೆ ಗುಂಡ್ಯ ಹೊಳೆಯ ನೆರೆಗೆ ಇಚಿಲಂಪ್ಪಾಡಿ ಸುತ್ತಮುತ್ತಲಿನ ಕೃಷಿ ಭೂಮಿಗೆ ನೆರೆ ನೀರು ನುಗ್ಗಿದೆ.
Last Updated : Aug 8, 2019, 9:46 PM IST