ಕರ್ನಾಟಕ

karnataka

ETV Bharat / videos

ಉಡುಪಿಯಲ್ಲಿ ಧಾರಾಕಾರ ಮಳೆಗೆ ತತ್ತರಿಸಿದ ಜನ -ಜೀವನ; ಹೀಗಿದೆ ಪರಿಸ್ಥಿತಿ

By

Published : Sep 22, 2020, 6:39 PM IST

ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಿರಿಯಡ್ಕದ ಮಾನೈ ಪರಿಸರದಲ್ಲಿ ಆರು ಮನೆಗಳು ಸಂಪೂರ್ಣ ನೆಲಸಮಗೊಂಡಿದ್ದು, ಮನೆಯ ಒಳಗಿನ ಯಾವುದೇ ವಸ್ತುಗಳನ್ನು ತೆಗೆಯಲಾಗದಷ್ಟು ಹಾನಿಯಾಗಿದೆ. ಅಲ್ಲದೇ, ಜಾನುವಾರುಗಳನ್ನು ಕಟ್ಟಿದ್ದ ಕೊಟ್ಟಿಗೆ ಸಮೇತ ಕುಸಿತಗೊಂಡಿದ್ದು, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿರುವ ಜನರ ಗೋಳು ಹೇಳ ತೀರದಂತಾಗಿದೆ. ನೂರಾರು ಎಕರೆ ಕೃಷಿ ಭೂಮಿಗಳಲಿದ್ದ ಭತ್ತದ ಸಸಿ ನಾಶವಾಗಿದೆ.

ABOUT THE AUTHOR

...view details