ಕರ್ನಾಟಕ

karnataka

ETV Bharat / videos

ಹೊಸನಗರದಲ್ಲಿ ವರುಣನ ಅಬ್ಬರ.. ಜನ ಜೀವನ ಅಸ್ತವ್ಯಸ್ತ.. - Shimoga heavy Rain

By

Published : Oct 25, 2019, 9:40 PM IST

ಶಿವಮೊಗ್ಗ:ಜಿಲ್ಲೆಯ ಕರಾವಳಿ ಭಾಗಕ್ಕೆ ಹೊಂದಿಕೊಂಡಿರುವ ಹೊಸನಗರ,ತೀರ್ಥಹಳ್ಳಿ,ಸಾಗರದ‌‌ ಶರಾವತಿ‌ ಹಿನ್ನೀರಿನ ಪ್ರದೇಶದಲ್ಲಿ ನಿನ್ನೆಯಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ತೊಗರೆ ಗ್ರಾಮದ ನೀಲಕಂಠ ಎಂಬುವರ ಮನೆ ಮೇಲೆ ತೆಂಗಿನ ಮರ ಬಿದ್ದು ಹೆಂಚುಗಳು ಹಾಗೂ ಗೋಡೆಗೆ ಹಾನಿಯಾಗಿದೆ. ಗಾಳಿ ಮಿಶ್ರಿತ ಮಳೆಗೆ ಅನೇಕ ಕಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಹೊಸನಗರ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ABOUT THE AUTHOR

...view details