ಲಾಕ್ಡೌನ್ ಪಾಲಿಸದ ಹಾಸನ ಜನತೆಗೆ ಎಸ್ಪಿ ಮಾಡಿದ್ದೇನು?
ಜನತಾ ಕರ್ಫ್ಯೂ ಉಲ್ಲಂಘಿಸಿ ಮೈದಾನದಲ್ಲಿ ಗುಂಪು ಗುಂಪಾಗಿ ನಡೆದಾಡುತ್ತಿದ್ದವರನ್ನು ತಮ್ಮ ಜೊತೆ ಕರೆದುಕೊಂಡು ಬಂದು ಮನೆಯಲ್ಲೇ ಮಾಡಬಹುದಾದ ಯೋಗ ಮತ್ತು ವ್ಯಾಯಾಮಗಳ ಬಗ್ಗೆ ಎಸ್ಪಿ ಪ್ರೀತಿಯಿಂದ ತಿಳಿ ಹೇಳಿದರು. ಡಿ.ಆರ್.ಮೈದಾನದಲ್ಲಿ ಯೋಗ ಗುರುಗಳನ್ನು ಕರೆಸಿ ಸರಳ ವ್ಯಾಯಾಮ ಮತ್ತು ಯೋಗಾಸನಗಳ ಬಗ್ಗೆ ಜನರಿಗೆ ತಿಳಿಸಿಕೊಟ್ಟರು.