ಕೊರೊನಾ ಎಫೆಕ್ಟ್: ಕಲೆಯನ್ನೇ ಉಸಿರಾಗಿ ನಂಬಿದ್ದವರ ಬದುಕಾಯ್ತು ಕತ್ತಲು...! - Hardship for Yakshagana artists in karavara
ಕಲೆಯನ್ನೇ ಉಸಿರಾಗಿಸಿಕೊಂಡ ರಂಗಭೂಮಿ ಕಲಾವಿದರಿಗೆ ಕೊರೊನಾ ದೊಡ್ಡ ಆಘಾತ ನೀಡಿತ್ತು. ಆದರೆ, ಇದೀಗ ಅನ್ ಲಾಕ್ 5.0 ಜಾರಿಯಾಗಿದ್ದು ಬಹುತೇಕ ಆರ್ಥಿಕ ಚಟುವಟಿಕೆಯ ಪುನರಾರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಾಟಕ, ಯಕ್ಷಗಾನಗಳಂತಹ ಕಲಾ ಪ್ರಕಾರಕ್ಕೆ ಈವರೆಗೂ ಅನುಮತಿ ನೀಡದಿರುವುದು ಕಲೆಯನ್ನೇ ನಂಬಿ ಬದುಕುತ್ತಿದ್ದವರಿಗೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.