ಜೆಡಿಎಸ್ ಚಿಂತನ-ಮಂಥನ ಸಭೆಗೆ ಜಿ.ಟಿ. ದೇವೇಗೌಡ ಗೈರು - ಜಿ.ಟಿ.ದೇವೇಗೌಡ ಗೈರು
ಮೈಸೂರು: ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಚಿಂತನ-ಮಂಥನ ಸಭೆಗೆ ಶಾಸಕ ಜಿ ಟಿ ದೇವೇಗೌಡ ಗೈರಾಗುವ ಮೂಲಕ ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ. ಚಿಂತನ-ಮಂಥನ ಸಭೆಯನ್ನು ಸಿಎಂ ಕುಮಾರಸ್ವಾಮಿ ಉದ್ಘಾಟಿಸಿದರು. ಇದು ಪಕ್ಷದ ಸಭೆಯಾಗಿದ್ದು, ನಮ್ಮ ನಡುವೆ ಕೆಲವು ವಿಚಾರ ವಿನಿಮಯ ನಡೆಯಬೇಕಿರುವುದರಿಂದ ಮಾಧ್ಯಮ ಪ್ರತಿನಿಧಿಗಳು ಈ ಸಭೆಯಿಂದ ಹೊರಗೆ ಹೋಗಬೇಕೆಂದು ಸ್ವತಃ ಕುಮಾರಸ್ವಾಮಿ ಅವರೇ ಮನವಿ ಮಾಡಿದ್ರು.