200 ಹಾಪ್ ಕಾಮ್ಸ್ನಲ್ಲಿ ಏಕ ಕಾಲಕ್ಕೆ ದ್ರಾಕ್ಷಿ-ಕಲ್ಲಂಗಡಿ ಮೇಳ.. - ದ್ರಾಕ್ಷಿ-ಕಲ್ಲಂಗಡಿ ಮೇಳ
ಬೆಂಗಳೂರು: ಹಾಪ್ ಕಾಮ್ಸ್ ವತಿಯಿಂದ ಆಯೋಜಿಸುವ ದ್ರಾಕ್ಷಿ-ಕಲ್ಲಂಗಡಿ ಮೇಳಕ್ಕೆ ಇಂದು ಸಚಿವ ನಾರಾಯಣ ಗೌಡ ಚಾಲನೆ ನೀಡಿದರು. ಒಂದೇ ಸೂರಿನಡಿ ನಾನಾ ಬಗೆಯ ದ್ರಾಕ್ಷಿಗಳು ಲಭ್ಯವಿದ್ದು, ಗ್ರಾಹಕರು ಒಂದು ತಿಂಗಳವರೆಗೂ ಖರೀದಿ ಮಾಡಬಹುದು. 200 ಕ್ಕೂ ಹೆಚ್ಚು ಹಾಪ್ ಕಾಮ್ಸ್ನಲ್ಲಿ ಈ ಮಾರಾಟ ಮೇಳ ಏಕ ಕಾಲಕ್ಕೆ ನಡೆಯುತ್ತಿದೆ. ಮಾಜಿ ಸಚಿವ ರಾಮಲಿಂಗ ರೆಡ್ಡಿ, ಹಾಪ್ ಕಾಮ್ಸ್ನ ಅಧ್ಯಕ್ಷ ಚಂದ್ರೇಗೌಡ, ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಸೇರಿ ಹಲವರು ಕಾರ್ಯಕ್ರಮದಲ್ಲಿದ್ದರು.