ಕರ್ನಾಟಕ

karnataka

ನಾಳೆ ಸೂರ್ಯಗ್ರಹಣ: ಘಾಟಿ ಸುಬ್ರಹ್ಮಣ್ಯ ದೇವಾಲಯ ಬಂದ್

By

Published : Jun 20, 2020, 2:04 PM IST

ದೊಡ್ಡಬಳ್ಳಾಪುರ: ಜೂನ್ 21ರಂದು ಸಂಭವಿಸುವ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಬಂದ್ ಮಾಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ರವರೆಗೂ ದೇವಾಲಯದ ಬಾಗಿಲು ಮುಚ್ಚಲಾಗುವುದು. ಸಂಜೆ 4 ಗಂಟೆಯ ನಂತರ ದೇವಸ್ಥಾನ ಸ್ವಚ್ಛಗೊಳಿಸಿದ ನಂತರ ಎಂದಿನಂತೆ ಭಕ್ತರ ದರ್ಶನಕ್ಕೆ ಮತ್ತು ಪೂಜೆಗೆ ದೇವಸ್ಥಾನವನ್ನು ತೆರೆಯಲಾಗುವುದು ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ ತಿಳಿಸಿದ್ದಾರೆ.

ABOUT THE AUTHOR

...view details