ಗೌರಿ- ಗಣೇಶ ಹಬ್ಬದ ಸಂಭ್ರಮ: ಸಾಮಾಜಿಕ ಅಂತರ ಮರೆತು ಖರೀದಿ - Gauri- Ganesha festival celebration
ಹಾಸನ: ಶ್ರಾವಣ ಮುಗಿದ ಮೇಲೆ ಗೌರಿ- ಗಣೇಶ ಹಬ್ಬದ ಸಂಭ್ರಮ. ಕೊರೊನಾ ನಡುವೆ ನಗರದ ಹೃದಯ ಭಾಗದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು, ಜನರು ಸಾಮಾಜಿಕ ಅಂತರ ಮರೆತು ಖರೀದಿ ಮಾಡುತ್ತಿದ್ದಾರೆ. ನಾಳೆ ಶುಕ್ರವಾರ ಗೌರಿ ಹಬ್ಬ ಮತ್ತು ಶನಿವಾರ ಗಣೇಶನ ಹಬ್ಬದ ಇದ್ದು, ಪ್ರತಿ ವರ್ಷದಂತೆ ಸಂಭ್ರಮ ಸಡಗರ ಮನೆ ಮಾಡಿದೆ. ಆದರೆ ಮಾರುಕಟ್ಟೆಗೆ ಬಂದ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದು ಕಂಡುಬಂತು.