ಕೊಪ್ಪಳದಲ್ಲಿ ಗಣೇಶ ನಿಮಜ್ಜನ ಮೆರವಣಿಗೆ: ಸಂಸದ ಸಂಗಣ್ಣ ಕರಡಿ ಸಖತ್ ಸ್ಟೆಪ್ - ತುಂಗಭದ್ರಾ ನಾಲೆ
ಕೊಪ್ಪಳ: ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ ನಗರದಲ್ಲಿ ಅದ್ಧೂರಿಯಾಗಿ ಜರುಗಿತು. ಡಿಜೆ ಸಂಗೀತದೊಂದಿಗೆ ಗಣೇಶ ಮೂರ್ತಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರದ ಜವಾಹರ ರಸ್ತೆ, ಗಡಿಯಾರ ಕಂಬದ ಮೂಲಕ ಸಾಗಿಬಂದು ಹುಲಿಕೇರಿ ಹಾಗೂ ಹಿಟ್ನಾಳ್ ಬಳಿಯ ತುಂಗಭದ್ರಾ ನಾಲೆಯಲ್ಲಿ ಮೂರ್ತಿಗಳ ನಿಮಜ್ಜನ ನೆರವೇರಿಸಿದರು. ಈ ವೇಳೆ ಯುವಕರೊಂದಿಗೆ ಸಂಸದ ಸಂಗಣ್ಣ ಕರಡಿ ಸ್ಟೆಪ್ ಹಾಕಿ ಸಂಭ್ರಮಿಸಿದರು.
Last Updated : Sep 11, 2019, 8:20 AM IST