ತುಮಕೂರು ಅರಣ್ಯದಿಂದ ವಲಸೆ ಹೊರಟ ಕೃಷ್ಣಮೃಗಗಳು.. ಅಧ್ಯಯನಕ್ಕಾಗಿ ಅರಣ್ಯ ಇಲಾಖೆ ಸಜ್ಜು - .ಅಧ್ಯಯನ್ನಕಾಗಿ ಅರಣ್ಯ ಇಲಾಖೆ ಸಜ್ಜು
ರಾಜ್ಯದಲ್ಲಿ ಅತಿ ದೊಡ್ಡ ಎರಡನೇ ಕೃಷ್ಣಮೃಗ ಸಂರಕ್ಷಣಾ ವನ್ಯಧಾಮ ಎಂಬ ಹೆಗ್ಗಳಿಕೆಗೆ ಮಧುಗಿರಿ ತಾಲೂಕಿನ ಮೈದನಹಳ್ಳಿ ಬಳಿಯಿರುವ ಜಯಮಂಗಲಿ ಕೃಷ್ಣಮೃಗ ಸಂರಕ್ಷಿತ ವನ್ಯಧಾಮ ಪಾತ್ರವಾಗಿದೆ. ಕೃಷ್ಣ ಮೃಗಗಳ ಸಂತತಿ ಹೆಚ್ಚಾಗುತ್ತಿದ್ದು, ಅವು ಗಡಿ ದಾಟಿ ಆಂಧ್ರ ಪ್ರದೇಶದತ್ತ ವಲಸೆ ಹೋಗುತ್ತಿರುವುದು ಅರಣ್ಯ ಇಲಾಖೆಗೆ ಹೊಸ ಸವಾಲು ಎದುರಾಗಿದೆ.