ಸಿಟಿ ಬಸ್ ಎಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿ: ಚಾಲಕನ ಮುಂಜಾಗೃತಿಯಿಂದ ಪ್ರಯಾಣಿಕರು ಪಾರು - Fire appearing on City Bus Engine
ತುಮಕೂರಿನ ಶಿವಕುಮಾರಸ್ವಾಮಿ ವೃತ್ತದಲ್ಲಿ ನಗರ ಸಾರಿಗೆಯ ಬಸ್ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ರಸ್ತೆ ಪಕ್ಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದರು. ಚಾಲಕನ ಮಂಜಾಗೃತಿಯಿಂದ ಪ್ರಾಣಾಪಯದಿಂದ ಪ್ರಯಾಣಿಕರು ಪಾರಾದಂತಾಯ್ತು. ಇದರಿಂದ ಕ್ಷಣಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಮೂಡಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿತು.