ಕರ್ನಾಟಕ

karnataka

By

Published : Oct 5, 2020, 9:31 PM IST

ETV Bharat / videos

ನನ್ನ ವಿರುದ್ಧ ಕೇಸ್​ ದಾಖಲಿಸುವುದು ತಪ್ಪು, ಇದೊಂದು ರಾಜಕೀಯ ಪಿತೂರಿ ಎಂದ ಡಿಕೆಶಿ!

ಬೆಂಗಳೂರು: ಕಾಂಗ್ರೆಸ್​ ಮುಖಂಡ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ನಿವಾಸದ ಮೇಲೆ ಇಂದು ಸಿಬಿಐ ದಾಳಿ ನಡೆಸಿ, 57 ಲಕ್ಷ ನಗದು ಸೇರಿ ಅಪಾರ ಪ್ರಮಾಣದ ದಾಖಲೆ ವಶಪಡಿಸಿಕೊಂಡಿದೆ. ಸಿಬಿಐ ದಾಳಿ ನಂತರ ಮಾತನಾಡಿರುವ ಡಿಕೆಶಿ ಇದೊಂದು ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ. ನನ್ನ ವಿರುದ್ಧ ಕೇಸ್​ ದಾಖಲು ಮಾಡಿರುವುದು ತಪ್ಪು. ರಾಜ್ಯದಲ್ಲಿ ನಾನು ಏಕೈಕ ರಾಜಕಾರಣಿ ಇಲ್ಲ. ನನ್ನ ಬೆಳವಣಿಗೆ ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ವ್ಯವಸ್ಥೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ನನಗೆ ಕಿರುಕಿಳ ನೀಡಲು ಅವರು ಇಷ್ಟಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details