ಕರ್ನಾಟಕ

karnataka

ETV Bharat / videos

ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿಗಾಗಿ ಕಾಗಿನೆಲೆ ಶ್ರೀ ಪಾದಯಾತ್ರೆ - ST reservation for kurubas

By

Published : Jan 15, 2021, 9:30 PM IST

ಹಾವೇರಿ: ಕುರುಬ ಜನಾಂಗಕ್ಕೆ ಎಸ್​ಟಿ ಮೀಸಲಾತಿಗೆ ಆಗ್ರಹಿಸಿ, ಕಾಗಿನೆಲೆ ಕನಕಗುರು ಪೀಠದ ಶ್ರೀಗಳು ಪಾದಯಾತ್ರೆ ಆರಂಭಿಸಿದ್ದಾರೆ. ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಕನಕದಾಸರ ಗದ್ದುಗೆಗೆ ಪೂಜೆ ಸಲ್ಲಿಸುವ ಮೂಲಕ ನಿರಂಜನಾನಂದ ಶ್ರೀಗಳು ಪಾದಯಾತ್ರೆ ಶುರು ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಸಚಿವರಾದ ಈಶ್ವರಪ್ಪ, ಆರ್.ಶಂಕರ್, ಮಾಜಿ ಸಚಿವ ಹೆಚ್.ವಿಶ್ವನಾಥ್, ಹೆಚ್.ರೇವಣ್ಣ ಸೇರಿದಂತೆ ಕುರುಬ ಸಮಾಜದ ವಿವಿಧ ಮುಖಂಡರು ಉಪಸ್ಥಿತರಿದ್ದರು. ಕಾಗಿನೆಲೆಯಿಂದ ಆರಂಭವಾದ ಪಾದಯಾತ್ರೆ ಸಂಜೆ 10 ಕಿಮೀ ದೂರದ ತಿಮಕಾಪುರ ತಲುಪಲಿದೆ. ನಾಳೆಯಿಂದ ದಿನಕ್ಕೆ 20 ಕಿ.ಮೀ ಶ್ರೀಗಳು 340 ಕಿಮೀ ಪಾದಯಾತ್ರೆ ನಡೆಸಲಿದ್ದಾರೆ. ಫೆಬ್ರುವರಿ 07 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ABOUT THE AUTHOR

...view details