ಕರ್ನಾಟಕ

karnataka

ETV Bharat / videos

ಬೆಲೆ ಸಿಗದೇ ಸೇವಂತಿ ಬೆಳೆ ನಾಶಗೊಳಿಸಿದ ರೈತ - ಹಾವೇರಿ ತಾಲೂಕಿನ ಹನುಮನಹಳ್ಳಿ

By

Published : May 21, 2021, 9:07 PM IST

ಹಾವೇರಿ: ಸೋಂಪಾಗಿ ಬೆಳೆದಿದ್ದ ಸೇವಂತಿ ಮಾರಾಟವಾಗದೇ ತಾಲೂಕಿನ ಹನುಮನಹಳ್ಳಿ ಗ್ರಾಮದ ರೈತ ಚಂದ್ರಪ್ಪ ಸೇವಂತಿ ಹೂ ನೆಲಸಮಗೊಳಿಸಿದ್ದಾನೆ. ಸುಮಾರು 35 ಸಾವಿರ ರೂಪಾಯಿ ವೆಚ್ಚ ಮಾಡಿ ಚಂದ್ರಪ್ಪ ಒಂದು ಎಕರೆಯಲ್ಲಿ ಸೇವಂತಿ ಬೆಳೆದಿದ್ದ. ಲಾಕ್​ಡೌನ್​ ಹಿನ್ನೆಲೆ ಮಾರಾಟಕ್ಕೆ ಹೋದರೂ ಹೂವು ಕೇಳುವವರಿಲ್ಲ. ಇದರಿಂದ ಬೇಸತ್ತ ಚಂದ್ರಪ್ಪ ಒಂದು ಎಕರೆಯಲ್ಲಿ ಬೆಳೆದಿದ್ದ ಸೇವಂತಿ ಹೂವನ್ನ ಟ್ರ್ಯಾಕ್ಟರ್ ರೋಟರ್ ಮೂಲಕ ನೆಲಸಮ ಮಾಡಿದ್ದಾನೆ.

ABOUT THE AUTHOR

...view details