ಮರಳಿನಲ್ಲಿ ಮೂಡಿದ ದುರ್ಗಾದೇವಿ... ಸ್ಯಾoಡ್ ಥೀಮ್ ತಂಡದಿಂದ ಸುಂದರ ಕಲಾಕೃತಿ! - ಶ್ರೀ ದುರ್ಗಾದೇವಿ
ನವರಾತ್ರಿ ಉತ್ಸವದ ಪ್ರಾರಂಭದ ಅಂಗವಾಗಿ ಕುಂದಾಪುರ ಕಡಲ ತಡಿಯಲ್ಲಿ ಮರಳು ಶಿಲ್ಪ ಕಲಾವಿದರು ಸುಂದರವಾದ ಶ್ರೀ ದುರ್ಗಾದೇವಿಯ ಮರಳು ಕಲಾಕೃತಿಯನ್ನು ರಚಿಸಿದ್ದಾರೆ. ಶುಭ ನವರಾತ್ರಿ ಎಂಬ ಅಡಿವಾಕ್ಯದಲ್ಲಿ ಶಂಖ ಚಕ್ರ, ಅಭಯ ಹಸ್ತದೊಂದಿಗೆ, ಕುಂಕುಮಾoಕಿತೆ ದೇವಿಯ ಮರಳು ಶಿಲ್ಪಕೃತಿಯನ್ನು ಉಡುಪಿಯ ಸ್ಯಾoಡ್ ಥೀಮ್ ತಂಡದ ಕಲಾವಿದರು ನಿರ್ಮಾಣ ಮಾಡಿದ್ದಾರೆ. ಸದ್ಯ ಕಡಲ ತಡಿಯಲ್ಲಿ ಪ್ರವಾಸಿಗರ ಗಮನ ಸೆಳೆಯುತ್ತಿದೆ ಈ ಸುಂದರ ಕಲಾಕೃತಿ.