ಕರ್ನಾಟಕ

karnataka

ETV Bharat / videos

ಕಾಶಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯ ಅದ್ಧೂರಿ ಪುರ ಪ್ರವೇಶ - ತುಮಕೂರು ಶಿವಾಚಾರ್ಯ ಸ್ವಾಮೀಜಿ ಪುರ ಪ್ರವೇಶ ಸುದ್ದಿ

By

Published : Dec 26, 2019, 10:20 AM IST

ತುಮಕೂರು: ಕಾಶಿಯ ಡಾ. ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಜಿಲ್ಲೆಯಲ್ಲಿ ಡಿಸೆಂಬರ್ ಇಂದಿನಿಂದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜಗದ್ಗುರುಗಳ ಪುರ ಪ್ರವೇಶವನ್ನು ಅದ್ಧೂರಿಯಾಗಿ ನಡೆಸಲಾಯಿತು. ನಗರದ ಸೋಮೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಶೆಟ್ಟಿಹಳ್ಳಿ ಸಮೀಪ ಇರುವ ವಿಶಾಲಾಕ್ಷಮ್ಮ ಸಭಾ ಭವನದವರೆಗೂ ಸಾಗಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳಾದ ವೀರಗಾಸೆ, ಚಿಟ್ಟಿಮೇಳ, ನಂದಿದ್ವಜ ಇನ್ನಷ್ಟು ಮೆರಗು ನೀಡಿದವು. ವಿದ್ಯಾರ್ಥಿಗಳ ಮಂತ್ರ ಘೋಷಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದ್ದು ಪ್ರಮುಖವಾಗಿತ್ತು. ಮೆರವಣಿಗೆಯಲ್ಲಿ ಡಾ. ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರನ್ನು ಭಕ್ತಿ ಪೂರ್ವಕವಾಗಿ ಮೆರವಣಿಗೆಯಲ್ಲಿ ಕರೆತರಲಾಯಿತು.

For All Latest Updates

TAGGED:

ABOUT THE AUTHOR

...view details