ಎಲ್ಲರೂ ಕಾಲಜ್ಞಾನಿಗಳಾಗಿದ್ದಾರೆ: ಸಿದ್ದುಗೆ ಅನರ್ಹ ಶಾಸಕ ಮುನಿರತ್ನ ಟಾಂಗ್ - ಅನರ್ಹ ಶಾಸಕ ಮುನಿರತ್ನರ ಲೇಟೆಸ್ಟ್ ಸುದ್ದಿ
ಬೆಂಗಳೂರು: ಬಿಜೆಪಿ ಸರ್ಕಾರ ಇವತ್ತು ಬೀಳುತ್ತೆ, ಇನ್ನು ಎರಡು ತಿಂಗಳಿಗೆ ಬೀಳುತ್ತೆ ಅಂತ ಹೇಳುವ ಮೂಲಕ ಎಲ್ಲರೂ ಕಾಲಜ್ಞಾನಿಗಳಾಗಿಬಿಟ್ಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಅನರ್ಹ ಶಾಸಕ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ನಗರದಲ್ಲಿ ರಮೇಶ್ ಜಾರಕಿಹೊಳಿ ನಿವಾಸದ ಬಳಿ ಮಾತನಾಡಿದ ಅವರು, ಈ ಕಾಲಜ್ಞಾನ ಸಮ್ಮಿಶ್ರ ಸರ್ಕಾರ ಇದ್ದಾಗ, ತಮ್ಮ ಶಾಸಕರಿಗೆ ಬೇಸರವಾದಾಗ ಇರಬೇಕಿತ್ತು. ಇದು ಮೊದಲೇ ಇದ್ದಿದ್ದರೆ ಸಮ್ಮಿಶ್ರ ಸರ್ಕಾರ ಉಳಿಸಬಹುದಿತ್ತು ಎಂದು ಗುಡುಗಿದ್ದಾರೆ.