ಬಳ್ಳಾರಿ : ಕೊರೊನಾ ವೈರಸ್ ಎಫೆಕ್ಟ್ನಿಂದ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಗಣಿನಗರಿಯ ಭಿಕ್ಷುಕರು, ಕಡು ಬಡವರಿಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಯೊಬ್ಬರು ಊಟ ನೀಡುತ್ತಿದ್ದಾರೆ. ಧ್ರುವ ಅಭಿಮಾನಿ ಎಂ ಜಿ ಕನಕ ಅವರು ಸತತ 12 ದಿನಗಳಿಂದ ನಗರದ ನಾನಾ ಕಡೆಗಳಲ್ಲಿ ನೆಲೆಸಿರುವ ಬೀದಿಬದಿಯ ಭಿಕ್ಷುಕರಿಗೆ ಹಾಗೂ ಕಡು ಬಡತನದಲ್ಲಿರೋರಿಗೆ, ವೃದ್ಧರಿಗೆ ದಿನಾಲು ಊಟ ಹಂಚಿಕೆ ಮಾಡುತ್ತಿದ್ದಾರೆ.