ಕರ್ನಾಟಕ

karnataka

By

Published : Feb 6, 2021, 11:53 AM IST

ETV Bharat / videos

ಧಾರವಾಡ ಅಪಘಾತ ಪ್ರಕರಣ: ಅಷ್ಟಪಥದ ರಸ್ತೆಗೆ ಆಗ್ರಹಿಸಿ ಮೃತರ ಕುಟುಂಬಸ್ಥರಿಂದ ಹೋರಾಟ

ಧಾರವಾಡ: ಬೈಪಾಸ್ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ನಡೆಸುತ್ತಿರುವ ಹೋರಾಟಕ್ಕೆ ಧಾರವಾಡದ ಜನತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾದ ಪಾದಯಾತ್ರೆ ವಿವಿಧ ರಸ್ತೆಗಳ‌ ಮೂಲಕ ಸಾಗಿ ಅಪಘಾತ ಸಂಭವಿಸಿದ ಸ್ಥಳ ತಲುಪಲಿದೆ. ಮಕರ ಸಂಕ್ರಮಣದ ಕರಿ ದಿನ ಇಟಿಗಟ್ಟಿ ಬಳಿ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ 11 ಜನ ಮೃತಪಟ್ಟಿದ್ದರು. ಈ ಹಿನ್ನೆಲೆ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಜನತೆ ಪಾದಯಾತ್ರೆ ನಡೆಸಿ ಮೃತರ ಕುಟುಂಬಸ್ಥರಿಗೆ ಸಾಥ್ ನೀಡಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ABOUT THE AUTHOR

...view details