ಕೊರೊನಾ ಎಫೆಕ್ಟ್:ಹಾಸನಾಂಬೆ 'ಸಂಕಲ್ಪ'ದೊಂದಿಗೆ ಕಲ್ಲಿಗೆ ಪೂಜೆ ಸಲ್ಲಿಸಿದ ಭಕ್ತರು...! - worship in front of an LED display at Hassan
ಎಲ್ಇಡಿ ಪರದೆ ಮುಂದೆ ಕಲ್ಲಿಟ್ಟು ಅದಕ್ಕೆ ಕುಂಕುಮ, ಹೂವನ್ನು ಹಾಕಿ ತಾಯಿ ಹಾಸನಾಂಬೆಗೆ ಪೂಜೆ ಸಲ್ಲಿಸಿದ ಪ್ರಸಂಗ ನಗರದ ತಣ್ಣೀರುಹಳ್ಳಿ ವೃತ್ತದಲ್ಲಿ ನಡೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಹಾಸನಾಂಬೆ ದೇವಾಲಯ ಬಾಗಿಲು ತೆರೆದಿದೆ. ಕೊರೊನಾ ಮಹಾಮಾರಿ ಆವರಿಸಿ ಅನೇಕರ ಪ್ರಾಣವನ್ನೇ ತೆಗೆದು ಕೊಂಡಿರುವ ಹಿನ್ನೆಲೆ ಜಿಲ್ಲಾಡಳಿತವು ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ ಹಾಸನಾಂಬೆ ದೇವಿ ದರ್ಶನ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸದೇ ಕೇವಲ ವಿಶೇಷ ಆಹ್ವಾನಿತರಿಗೆ ಮಾತ್ರ ಅವಕಾಶ ನೀಡಿದೆ.