ಭಾರೀ ಮಳೆಗೆ ಕೊಚ್ಚಿ ಹೋದ ಬ್ಯಾರೇಜ್... ಸಣ್ಣ ನೀರಾವರಿ ಇಲಾಖೆಯಿಂದ ತಾತ್ಕಾಲಿಕ ತಡೆಗೋಡೆ! - Destruction of Bridge by rain in koppala
ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ವರುಣನ ಆರ್ಭಟಕ್ಕೆ ಬ್ರೇಕ್ ಬಿದ್ದಿದೆ. ಆದರೆ ಕಳೆದ ವಾರ ಸುರಿದ ಮಳೆಯಿಂದ ಕೊಪ್ಪಳ ತಾಲೂಕಿನ ಕೋಳೂರು-ಮಂಗಳಾಪುರ ನಡುವೆ ಇರುವ ಹಿರೇಹಳ್ಳಕ್ಕೆ ನಿರ್ಮಿಸಲಾಗಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ಕೊಚ್ಚಿ ಹೋಗಿತ್ತು. ಪರಿಣಾಮ ಬ್ಯಾರೇಜ್ನಲ್ಲಿನ ನೀರು ಸಹ ಈಗ ಖಾಲಿಯಾಗಿದೆ. ನೀರಿನ ರಭಸಕ್ಕೆ ಬ್ಯಾರೇಜ್ ಪಕ್ಕದಲ್ಲಿನ ಜಮೀನು ಕೊಚ್ಚಿ ಹೋಗಿದೆ. ಒಂದು ವೇಳೆ ಮತ್ತೆ ಮಳೆಯಾಗಿ ಹಳ್ಳಕ್ಕೆ ನೀರು ಹರಿದುಬಂದರೆ ಮತ್ತಷ್ಟು ಜಮೀನು ಕೊಚ್ಚಿಹೋಗಬಾರದು ಎಂದು ಸಣ್ಣ ನೀರಾವರಿ ಇಲಾಖೆ ಮರಳಿನ ಚೀಲದ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡುತ್ತಿದೆ. ಸ್ಥಳದಲ್ಲಿನ ವಸ್ತುಸ್ಥಿತಿ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ...
Last Updated : Oct 17, 2020, 3:06 PM IST