ಕಳೆದ ಎರಡು ತಿಂಗಳ ಹಿಂದೆ ಮಲೆನಾಡಿನಲ್ಲಿ ಸುರಿದ ಭಾರಿ ಮಳೆ ಮಲೆನಾಡಿಗರ ಬದುಕನ್ನು ಛಿದ್ರಗೊಳಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಪರಿಹಾರ ಸಿಗದಿದ್ದಕ್ಕೆ ಬೇಸತ್ತು ಒಬ್ಬ ರೈತ ಆತ್ಮಹತ್ಯೆಗೆ ಶರಣಾಗಿದ್ದ ಬೆನ್ನಲ್ಲೇ ಇಂದು ಮತ್ತೊಬ್ಬ ಅನ್ನದಾತ ನೇಣಿಗೆ ಕೊರಳೊಡಿದ್ದಾನೆ. ಸರ್ಕಾರದ ವಿಳಂಬ ಧೋರಣೆ ಇಬ್ಬರು ರೈತರನ್ನು ಬಲಿ ತೆಗೆದುಕೊಂಡಿದೆ ಎಂದು ಆರೋಪಿಸಿದ ರೈತರು ಇವತ್ತು ಬೀದಿಗಿಳಿದಿದ್ರು.