ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೀಪಾಳೆ ಕಂಬ ಸ್ಥಾಪನೆ - Kukke Subrahmanya Temple
ಸುಬ್ರಹ್ಮಣ್ಯ: ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ದೀಪಾಳೆ ಕಂಬ ಸ್ಥಾಪನೆ ಮಾಡಲಾಯಿತು. ಪ್ರತಿ ವರ್ಷ ದೀಪಾವಳಿಯ ಆರಂಭದ ನರಕ ಚರ್ತರ್ಥಿ ದಿನ ಈ ಉದ್ದನೆಯ ಮರದ ಕಂಬವನ್ನು ಸ್ಥಾಪಿಸಲಾಗುತ್ತದೆ. ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಹೆಚ್., ಉಪ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಬಾಲಸುಬ್ರಹ್ಮಣ್ಯ ಭಟ್, ಜಯರಾಮ ರಾವ್, ಗೋಪಿನಾಥ ನಂಬೀಶ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.