ಕರ್ನಾಟಕ

karnataka

ETV Bharat / videos

ಬೈಕ್ ಸ್ಕಿಡ್ ಆಗಿ ಬಿದ್ದು ಯುವಕ ಸಾವು - ಬಸವನ ಬಾಗೇವಾಡಿ ಪಿಎಸ್​ಐ ಚಂದ್ರಶೇಖರ ಹೆರಕಲ್

By

Published : Jan 15, 2020, 10:58 AM IST

Updated : Jan 15, 2020, 11:44 AM IST

ವಿಜಯಪುರ: ಬೈಕ್ ಸ್ಕಿಡ್ ಆಗಿ ಬಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಂದಿಹಾಳ ಕ್ರಾಸ್ ಹತ್ತಿರ ನಡೆದಿದೆ. ಹಂಚಿನಾಳ ಗ್ರಾಮದ ಶಂಕರ್ ಗುರಪ್ಪ ವಡ್ಡರ (22) ಮೃತ ದುರ್ದೈವಿ. ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾಗ ಆಕಸ್ಮಿಕವಾಗಿ ಬೈಕ್ ಸ್ಕಿಡ್ ಆಗಿ ರಸ್ತೆ ಬದಿ ಬಿದ್ದಿದ್ದಾನೆ. ಆಗ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಪಿಎಸ್​ಐ ಚಂದ್ರಶೇಖರ ಹೆರಕಲ್ ಹಾಗೂ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jan 15, 2020, 11:44 AM IST

ABOUT THE AUTHOR

...view details