ರಾಜ್ಯೋತ್ಸವ ಭಾಷಣದ ವೇಳೆ ತಡವರಿಸಿದ ಸವದಿ... ಮುಜುಗರಕ್ಕೊಳಗಾದ ಡಿಸಿಎಂ - koppal news
ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿಯೇ ಡಿಸಿಎಂ ಲಕ್ಷ್ಮಣ ಸವದಿ ಅವರು ಕನ್ನಡ ಭಾಷೆ ಕುರಿತು ಭಾಷಣ ಮಾಡಿದರು. ಕೊಪ್ಪಳ ಜಿಲ್ಲಾಡಳಿತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಕನ್ನಡ, ಕರ್ನಾಟಕದ ಇತಿಹಾಸವನ್ನು ಪುನರುಚ್ಚರಿಸಿದರು. ಇನ್ನು ಭಾಷಣ ಓದುವ ವೇಳೆ ಹಲವೆಡೆ ಉಚ್ಚಾರಣೆಯಲ್ಲಿ ದೋಷ ಕಂಡುಬಂದ ಹಿನ್ನೆಲೆ ನೆರೆದಿದ್ದವರು ಸ್ವಲ್ಪ ಮುಜುಗರಕ್ಕೆ ಒಳಗಾಗುವಂತೆ ಆಯಿತು.
Last Updated : Nov 1, 2019, 2:01 PM IST