ಕರ್ನಾಟಕ

karnataka

By

Published : Mar 15, 2020, 1:42 PM IST

ETV Bharat / videos

ಕೊರೊನಾ ಹೆಸರಲ್ಲಿ ಗಿಡಮೂಲಿಕೆಗಳ ಅಕ್ರಮ ಮಾರಾಟ ಕಾನೂನುಬಾಹಿರ: ಜಿಲ್ಲಾಧಿಕಾರಿ ಎಚ್ಚರಿಕೆ

ಬಳ್ಳಾರಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಔಷಧೀಯ ಗುಣವಿದೆ ಎಂದು ಜನರಿಗೆ ತಪ್ಪು ಮಾಹಿತಿ ನೀಡಿ ಗಿಡಮೂಲಿಕೆಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸಲಾಗುವುದು ಎಂದು ಡಿಸಿ ನಕುಲ್ ​ಎಚ್ಚರಿಸಿದ್ದಾರೆ. ಆ ಎಲೆ ತಿಂದ್ರೆ ಕೊರೊನಾ ವೈರಸ್ ತಡೆಗಟ್ಟಬಹುದು ಎಂಬ ಸುಳ್ಳು ವದಂತಿ ಹಬ್ಬಿಸಿ ಅಕ್ರಮವಾಗಿ ಗಿಡಮೂಲಿಕೆಗಳನ್ನು ಮಾರಾಟ‌ ಮಾಡುವವರ ಬಗ್ಗೆ ಸಾರ್ವಜನಿಕರು ನೇರವಾಗಿ‌ ಜಿಲ್ಲಾಡಳಿತದ ಕಚೇರಿಗೆ ಮಾಹಿತಿ ನೀಡಬೇಕು. ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.‌ ಇಂತಹ ಸಂದರ್ಭದಲ್ಲಿ ಯಾರಾದ್ರೂ ಸಾಂಕ್ರಾಮಿಕ ಕಾಯಿಲೆ ಹೆಸರಿನಡಿ ಗಿಡಮೂಲಿಕೆಗಳನ್ನು ಕೊಟ್ಟು ಸಾರ್ವಜನಿಕರನ್ನ ಹಾದಿ ತಪ್ಪಿಸುವ ಕೆಲಸ ಮಾಡಿದ್ರೆ ಅಂಥವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.

ABOUT THE AUTHOR

...view details