ಕರ್ನಾಟಕ

karnataka

ETV Bharat / videos

ಬೆಣ್ಣೆ ನಗರಿ ಹೋಟೆಲ್‌‌,ಅಂಗಡಿ ಮಾಲೀಕರಿಂದ ಬಂದ್‌ಗೆ ಬೆಂಬಲವಿಲ್ಲ

By

Published : Dec 4, 2020, 5:44 PM IST

ದಾವಣಗೆರೆ: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಆದರೆ ಈ ಬಂದ್​ಗೆ ಬೆಣ್ಣೆ ನಗರಿಯ ಅಂಗಡಿ ಹಾಗೂ ಹೋಟೆಲ್‌ ಮಾಲೀಕರು ಬೆಂಬಲ ನೀಡಲು ನಿರಾಕರಿಸಿದ್ದಾರೆ. ಕೊರೊನಾದಿಂದ ಈಗಾಗಲೇ ವ್ಯಾಪಾರವಿಲ್ಲದೆ ಹೈರಾಣಾಗಿದ್ದೇವೆ. ಬಂದ್ ಮಾಡಿದ್ರೆ ನಮಗೆ ಆರ್ಥಿಕವಾಗಿ ನಷ್ಟವಾಗುತ್ತದೆ ಎಂದಿದ್ದಾರೆ. ದಾವಣಗೆರೆಯ 28 ಸಂಘಟನೆಗಳು ಈಗಾಗಲೇ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದು,ಅಂಗಡಿ ಹಾಗೂ ಹೋಟೆಲ್‌ ಮಾಲೀಕರು ಮಾತ್ರ ಬೆಂಬಲ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ವಿವರವಾದ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details