ಕರ್ನಾಟಕ

karnataka

ETV Bharat / videos

ಭಾರೀ ಮಳೆಗೆ ಕೊಚ್ಚಿ ಹೋದ ನಿರ್ಮಾಣ ಹಂತದ ಚೆಕ್ ಡ್ಯಾಂ!

By

Published : Jun 24, 2019, 11:53 AM IST

ಕೊಪ್ಪಳ : ನಿನ್ನೆ ರಾತ್ರಿ ಜಿಲ್ಲೆಯ ವಿವಿಧೆಡೆ ವರುಣ ಅಬ್ಬರಿಸಿದ್ದಾನೆ. ರಾತ್ರಿ ಸುರಿದ ಮಳೆಗೆ ತಾಲೂಕಿನ ಕಿನ್ನಾಳ ಗ್ರಾಮದ ಹಿರೇಹಳ್ಳದಲ್ಲಿ ನಿರ್ಮಾಣವಾಗುತ್ತಿದ್ದ ಚೆಕ್ ಡ್ಯಾಂ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.‌ ಇತ್ತೀಚೆಗೆ ಚೆಕ್ ಡ್ಯಾಂ‌ ನಿರ್ಮಿಸಲಾಗುತ್ತಿತ್ತು. ಆದರೆ, ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಿರ್ಮಾಣ ಹಂತದ ಚೆಕ್ ಡ್ಯಾಂ ಕೊಚ್ಚಿಕೊಂಡು ಹೋಗಿದೆ.‌ ನೀರಿಲ್ಲದೇ ಸತತ ಬರಡಾಗಿದ್ದ ಜಿಲ್ಲೆಯ ವಿವಿಧ ಹಳ್ಳಕೊಳ್ಳಗಳು ಮಳೆಯಿಂದಾಗಿ ಇಂದು ತುಂಬಿ ಹರಿಯುತ್ತಿವೆ.

ABOUT THE AUTHOR

...view details