ಕರ್ನಾಟಕ

karnataka

ETV Bharat / videos

ಯಾದಗಿರಿ ಜಿಲ್ಲೆಗೆ ಡೆಡ್ಲಿ ಕೊರೊನಾ ವೈರಸ್ ಎಂಟ್ರಿ: ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ - ಯಾದಗಿರಿಯಲ್ಲಿ ಕೊರೊನಾ ಕೇಸ್​ ಪತ್ತೆ ಸುದ್ದಿ

By

Published : May 13, 2020, 4:44 PM IST

ಹಸಿರು ವಲಯವಾಗಿದ್ದ ಯಾದಗಿರಿ ಜಿಲ್ಲೆಗೆ ಡೆಡ್ಲಿ ಕೊರೊನಾ ವೈರಸ್ ಎಂಟ್ರಿ ಕೊಟ್ಟಿದ್ದು, ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದೆ. ಕಳೆದ ಮೇ 4 ರಿಂದ ಲಾಕ್​ಡೌನ್‌ ಸಡಿಲಿಕೆ ಮಾಡಿತ್ತು. ಆದ್ರೆ ನಿನ್ನೆ ಜಿಲ್ಲೆಯ ಸುರಪುರ ಪಟ್ಟಣದ ದಂಪತಿಗೆ ಸೋಂಕು ದೃಢಪಡುತ್ತಿದ್ದಂತೆ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನ ತೆರೆಯಲು ಅವಕಾಶ ನೀಡಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಿಲ್ಲಾಡಳಿತ ಆದೇಶ ನೀಡಿದೆ. ಆದರೆ ಜಿಲ್ಲೆಯ ಜನ ಮಾತ್ರ ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಅಂತ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ರಸ್ತೆಗಿಳಿದು ಆತಂಕ ಸೃಷ್ಟಿ ಮಾಡುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ABOUT THE AUTHOR

...view details