ಕೊರೊನಾ ಎಫೆಕ್ಟ್: ಗುಂಪಾಗಿ ಹರಟೆ ಹೊಡೆಯದಂತೆ ಜನರಿಂದಲೇ ಮಾಸ್ಟರ್ ಸ್ಟ್ರೋಕ್..!
ಕೊರೊನಾ ವೈರಸ್ ಹರಡದಂತೆ ತಡೆಯಲು ಧಾರವಾಡದ ಹೆಬ್ಬಳ್ಳಿ ಗ್ರಾಮಸ್ಥರು ಹೊಸ ಉಪಾಯ ಕಂಡುಕೊಂಡಿದ್ದಾರೆ. ಗ್ರಾಮದ ಕಟ್ಟೆಗಳ ಮೇಲೆ ಯಾರು ಕೂರದಂತೆ ಜನರು ಡಾಂಬರ್ ಸುರಿಯುತ್ತಿದ್ದು, ಹರಟೆ ಹೊಡೆಯಲು ಗಿಡದ ಕೆಳಗೆ ಅನಗತ್ಯವಾಗಿ ಕೂರುವ ಜನರಿಗೆ ತಿಳಿವಳಿಕೆ ಹೇಳಿದ್ರೂ ಕೇಳದ ಹಿನ್ನೆಲೆ ಡಾಂಬರ್ ಸುರಿಯಲಾಗಿದೆ. ಗಿಡದ ಕೆಳಗೆ ಇರುವ ಕಟ್ಟೆಯ ಮೇಲೆ ಡಾಂಬರ್ ಸುರಿದು ಜನ ಒಟ್ಟಿಗೆ ಸೇರದಂತೆ ಪ್ಲ್ಯಾನ್ ಮಾಡಲಾಗಿದೆ.