ಕರ್ನಾಟಕ

karnataka

By

Published : Jun 29, 2020, 4:19 PM IST

ETV Bharat / videos

ಉಡುಪಿ:ಪೆಟ್ರೋಲ್ , ಡೀಸೆಲ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಇಂಧನ ಬೆಲೆ ಏರಿಕೆ ವಿರುದ್ಧ ಉಡುಪಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಉಡುಪಿ ಜಿಲ್ಲಾ ಕಾಂಗ್ರೆಸ್​​ನಿಂ​ದ ಹುತಾತ್ಮ‌ ಸೈನಿಕ ಸ್ಮಾರಕದೆದುರು ಪ್ರತಿಭಟನೆ ನಡೆದಿದ್ದು, ನಿರಂತರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಮಾಜಿ ಸಚಿವ ವಿನಯಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮೋದಿ ನೇತೃತ್ವದ ಸರಕಾರ ಜನವಿರೋಧಿ ಸರಕಾರವಾಗಿದ್ದು ಕೊರೊನಾ ಲಾಕ್​​ಡೌನ್ ಸಂದರ್ಭ ನಿರಂತರ ಬೆಲೆ ಏರಿಸಿ ಜನರಿಗೆ ಮೋಸ ಮಾಡಿದೆ. ಜನರ ಮೇಲೆ ಕಿಂಚಿತ್ತೂ ಕರುಣೆ ಇಲ್ಲದ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು‌ ಎಂದು ಮಾಜಿ ಸಚಿವ ಸೊರಕೆ ಆಗ್ರಹಿಸಿದರು. ಚೌಕಿದಾರ್ ಚೋರ್ ಹೈ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದ್ರು.

ABOUT THE AUTHOR

...view details