ಕರ್ನಾಟಕ

karnataka

By

Published : Jul 31, 2019, 10:53 AM IST

ETV Bharat / videos

ಮಾಲೀಕನನ್ನು ನೆನೆದು ಕಣ್ಣೀರು ಹಾಕಿದ ಕಾಫಿ ಡೇ ಸಿಬ್ಬಂದಿ

ಬೆಂಗಳೂರಿನ ಸದಾಶಿವನಗರದ ಕಾಫಿ ಡೇ ಸಿಬ್ಬಂದಿ ಸಿದ್ದಾರ್ಥ್​ ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಸಿದ್ದಾರ್ಥ್​ ಅವರು ಒಂದು ತಿಂಗಳ ಹಿಂದೆ ಕಾಫಿ ಡೇ ಗೆ ಬಂದಿದ್ರು ಆತ್ಮೀಯವಾಗಿ ಮಾತನಾಡಿಸಿದ್ದರು ಎಂದು ತಮ್ಮ ಮಾಲೀಕ ಸಿದ್ದಾರ್ಥ್ ನೆನೆದು ಕಣ್ಣೀರು ಹಾಕುತ್ತಿದ್ದಾರೆ . ಉತ್ತಮ ಸಂಬಳದೊಂದಿಗೆ, ವಸತಿ ವ್ಯವಸ್ಥೆಯೊಂದಿಗೆ ನಮ್ಮ ಅನ್ನದಾತರಾಗಿದ್ದರು. ನಷ್ಟದಲ್ಲಿದ್ದರೂ ಸಿಬ್ಬಂದಿಗೆ ಒಂದು ತಿಂಗಳೂ ಸಂಬಳ ಸಮಸ್ಯೆಯಾಗಿಲ್ಲ. ಅವರ ಸಾವು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ಅವರ ಅಂತಿಮ ದರ್ಶನಕ್ಕೆ ಚಿಕ್ಕಮಗಳೂರಿಗೆ ಹೋಗುತ್ತಿದ್ದೇವೆ ಎಂದು ಇಲ್ಲಿನ ಕಾಫಿ ಡೇ ಸಿಬ್ಬಂದಿ ಹೇಳಿದ್ದಾರೆ.

ABOUT THE AUTHOR

...view details