ವೈದ್ಯರ ದಿನಾಚರಣೆ: ಬಾಗಲಕೋಟೆಯ ಸಮಾಜಮುಖಿ ನೇತ್ರ ತಜ್ಞರ ಜೊತೆ ಮಾತುಕತೆ
ಡಾ. ಬಿ.ಸಿ.ರಾಯ್ ಅವರ ಸ್ಮರಣಾರ್ಥ ಇಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಮಾಡಲಾಗುತ್ತದೆ. ವೈದ್ಯ ವೃತ್ತಿಯನ್ನು ಆರಂಭಿಸಿದ ರಾವ್ ಅವರು ಮುಂದೆ ರಾಜಕೀಯದಲ್ಲಿಯೂ ಸಾಧನೆ ಮಾಡಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆಗಿ, ಜನರ ಸೇವೆ ಮಾಡಿ ಹೆಸರುವಾಸಿಯಾಗಿದ್ದರು. ಇವರ ನೆನಪಿಗಾಗಿ ವೈದ್ಯರ ದಿನಾಚರಣೆ ಮಾಡಲಾಗುತ್ತಿದೆ. ಇಂದು ವೈದ್ಯರ ದಿನದ ಹಿನ್ನೆಲೆಯಲ್ಲಿ ನಗರದ ಖ್ಯಾತ ಕಣ್ಣಿನ ವೈದ್ಯರಾದ ಡಾ. ಗಿರೀಶ್ ಮಾಸೂರಕರ ಜೊತೆ ನಮ್ಮ ಪ್ರತಿನಿಧಿ ಮಾತುಕತೆ ನಡೆಸಿದ್ದಾರೆ.