ಕರ್ನಾಟಕ

karnataka

By

Published : Dec 26, 2019, 12:30 PM IST

ETV Bharat / videos

ಗ್ರಹಣ ಹಿನ್ನೆಲೆ ತಿಪ್ಪೆಯಲ್ಲಿ ಹೂತಿದ್ದ ಮಕ್ಕಳ ರಕ್ಷಣೆ ...

ಕಲಬುರಗಿ: ಕಂಕಣ ಸೂರ್ಯ ಗ್ರಹಣ ಹಿನ್ನೆಲೆ ಕಲಬುರಗಿಯಲ್ಲಿ ಹೂತಿಟ್ಟಿದ್ದ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ತಾಲೂಕಿನ ತಾಜ್ ಸುಲ್ತಾನಪುರ ಗ್ರಾಮದಲ್ಲಿ ಮೂವರು ಮಕ್ಕಳನ್ನು ತಿಪ್ಪೆಗುಂಡಿಯಲ್ಲಿ ಕುತ್ತಿಗೆವರೆಗೂ ದೇಹವನ್ನು ಹೂತಿಡಲಾಗಿತ್ತು. ಅನಾರೋಗ್ಯ, ಮಾನಸಿಕ, ದೈಹಿಕ ಅಂಗವೈಕಲ್ಯದಿಂದ ಬಳಲುತ್ತಿದ್ದ ಮಕ್ಕಳನ್ನೂ ಈ ರೀತಿ ಮಾಡಿದರೆ ಸರಿಹೋಗುತ್ತದೆ ಅನ್ನೋ ಮೂಢನಂಬಿಕೆ ಹಿನ್ನೆಲೆ ಪೋಷಕರು ಮಕ್ಕಳನ್ನು ಈ ರೀತಿ ಮಾಡಿದ್ರು. ಮಾಧ್ಯಮದಲ್ಲಿ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಮಾಹಿತಿ ಅರಿತ ಜನವಾದಿ ಮಹಿಳಾ ಸಂಘಟನೆ ಹಾಗು ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮೂವರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ABOUT THE AUTHOR

...view details