ಮಿನಿಸಮರದಲ್ಲಿ ಬೆಚ್ಚಿ ಬಿದ್ದ ಕಾಂಗ್ರೆಸ್..! ಕಮಲ ಕಿಲಕಿಲ..!
ಹೈವೋಲ್ಟೇಜ್ ಮಿನಿ ಸಮರದಲ್ಲಿ ಕಾಂಗ್ರೆಸ್ ತತ್ತರಿಸಿದೆ. ಹಿಂದಿನ ಸರ್ಕಾರದ ವೇಳೆ ಸ್ಪೀಕರ್ ಕಾಂಗ್ರೆಸ್ ಶಾಸಕರಿಗೆ ನೀಡಿದ್ದ ಅನರ್ಹತೆಯ ಪಟ್ಟವನ್ನು ಮತದಾರ ತಿರಸ್ಕರಿಸಿದ್ದಾನೆ. ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿಯ ವಿಜಯನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಕಮಲಪಾಳಯ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಗೆದ್ದು ಪರಾಕ್ರಮ ಮೆರೆದಿದೆ. ಅಷ್ಟೇ ಅಲ್ಲದೇ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಬಿಜೆಪಿ ಧೂಳೀಪಟ ಮಾಡಿದೆ..