ಸ್ವಚ್ಛತೆ ಸಮೀಕ್ಷೆಗೆ ಬಂದ ಅಧಿಕಾರಿಗೆ ಕಸದ ರಾಶಿ ಸ್ವಾಗತ... ಇದು ಈ ನಗರದ ಕಥೆ!
ಕೋಲಾರ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಅಮ್ಮಾವಾರಿ ಪೇಟೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಮೀಕ್ಷೆ ನಡೆಸಿದ ಕೇಂದ್ರದ ಅಧಿಕಾರಿ ಮಂಜುಳಾ ಅವರಿಗೆ ಕಂಡಂಲೆಲ್ಲ ಕಸದ ರಾಶಿ ಸ್ವಾಗತಿಸಿತು. ನಗರದಾದ್ಯಂತ ಸಮೀಕ್ಷೆ ನಡೆಸಿದ ಅವರು, ಕೋಲಾರ ನಗರದಲ್ಲಿ ಮೂರು ವರ್ಷಗಳಿಂದಲೂ ಸ್ವಚ್ಛತೆ ಅಷ್ಟಕ್ಕಷ್ಟೆ. ಇದೆ. ಮುಂಜಾನೆಯಿಂದ ವೀಕ್ಷಿಸಿದ್ದು, ಸ್ವಚ್ಛತೆ ನೋಡಿದರೆ ನಗರಸಭೆ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಕಿಡಿಕಾರಿದರು.