ದಂಪತಿ ಇದ್ದ ಕಾರಿಗೆ ಬೆಂಕಿ... ಪತ್ನಿ ಸಜೀವ ದಹನ, ವ್ಯಕ್ತಿ ನರಳಾಟ ನೋಡಿಯೂ ಸಹಾಯ ಮಾಡದ ಜನ
ಬೆಳಗಾವಿ: ದಂಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕಾರಿನಲ್ಲಿದ್ದ ಪತ್ನಿ ಸಜೀವ ದಹನವಾಗಿದ್ದು, ಕಾರಿನಿಂದ ಜಿಗಿದ ಪತಿ ಸುಟ್ಟು ಗಾಯಗೊಂಡು ರಸ್ತೆ ಮೇಲೆ ನರಳಾಡುತ್ತಿದ್ದರೂ ಯಾರೂ ರಕ್ಷಣೆಗೆ ಬಾರದೆ ನಿಂತು ನೋಡುತ್ತಿದ್ದ ಅಮಾನವೀಯ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅಂಬೋಲಿ ಫಾಲ್ಸ್ ಬಳಿ ನಡೆದಿದೆ. ಬೆಳಗಾವಿ ಮೂಲದ ದುಂಡಪ್ಪ ಪದ್ಮನ್ನವರ್ ದಂಪತಿ ಜಿಲ್ಲೆಯಿಂದ ಮಹಾರಾಷ್ಟ್ರದ ಸಾವಂತವಾಡಿಗೆ ತೆರಳುವಾಗ ಈ ದುರ್ಘಟನೆ ನಡೆದಿದೆ. ವ್ಯಕ್ತಿ ನರಳಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Last Updated : Mar 19, 2020, 5:11 PM IST