ಮಳೆಯಲ್ಲೂ ಘಟಾನುಘಟಿ ನಾಯಕರ ಘರ್ಜನೆ... ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ - ಬೆಂಗಳೂರು ಯಶವಂತಪುರ ಹೊಸಕೋಟೆ ಪ್ರಚಾರ ಸುದ್ದಿ
ಹೊಸಕೋಟೆ ಕ್ಷೇತ್ರದಲ್ಲಿ ಮತಬೇಟೆ ನಡೆಸಿದ ಎಂಟಿಬಿ ನಾಗರಾಜ್, ಬಚ್ಚೇಗೌಡ ಕುಟುಂಬದ ವಿರುದ್ಧ ಭೂ ಕಬಳಿಕೆ ಅಸ್ತ್ರ ಪ್ರಯೋಗಿಸಿದ್ದಾರೆ. ಸ್ವಾಭಿಮಾನಿ ಎನ್ನುವ ಇವರು, ಸರ್ಕಾರಿ ಜಮೀನು ಸೇರಿದಂತೆ ಬಡವರಿಗೆ ಸೇರಿದ ಜಾಗ ಕಬಳಿಸಿದ್ದಾರೆ ಎಂದು ಶರತ್ ಬಚ್ಚೇಗೌಡ ಕುಟುಂಬದ ವಿರುದ್ಧ ಗುಡುಗಿದರು. ಅಲ್ಲದೆ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಸವಾಲು ಹಾಕಿದರು.