ಕರ್ನಾಟಕ

karnataka

By

Published : Oct 5, 2019, 8:11 PM IST

ETV Bharat / videos

ಕಾಫಿನಾಡಲ್ಲಿ ಮಳೆಯೋ ಮಳೆ; ಕೊಚ್ಚಿ ಹೋದ ಸೇತುವೆ

ಭಾರೀ ಮಳೆ ಸುರಿಯುತ್ತಿರುವ ಕಾರಣ ನೋಡ ನೋಡುತ್ತಲೇ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋದ ಘಟನೆ ಮೂಡಿಗೆರೆ ತಾಲೂಕಿನ ಹೊಕ್ಕಳ್ಳಿ ಕೊಪ್ಪದಲ್ಲಿ ಜರುಗಿದೆ. ಕಳೆದ 2 ತಿಂಗಳ ಹಿಂದಷ್ಟೇ ನಿರ್ಮಾಣವಾಗಿದ್ದ ಗ್ರಾಮದ ಸೇತುವೆ, ವರುಣಾರ್ಭಟಕ್ಕೆ ಕೊಚ್ಚಿ ಹೋಗಿದೆ. ಸೇತುವೆ ಮೇಲೆ ಚಲಿಸುತ್ತಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, 2 ಕಿ.ಮೀ ದೂರಕ್ಕೆ ಸೇತುವೆಯ ಪೈಪುಗಳು ನೀರುಪಾಲಾಗಿವೆ. ಹೊರನಾಡು-ಹೊಕ್ಕಳ್ಳಿ-ಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿತ್ತು.

ABOUT THE AUTHOR

...view details