ಕರ್ನಾಟಕ

karnataka

By

Published : Dec 11, 2020, 1:48 PM IST

ETV Bharat / videos

ಪ್ರಯಾಣಿಕರಿಗೆ ತೊಂದರೆಯಾಗಿದ್ದಕ್ಕೆ ಕ್ಷಮೆ ಇರಲಿ: ಬಿಎಂಟಿಸಿ ಸಿಬ್ಬಂದಿ

ಬೆಂಗಳೂರು: ಇಂದು ರಾಜ್ಯಾದ್ಯಂತ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಬಸ್​ ಸಂಚಾರ ಸಂಪೂರ್ಣ ಬಂದ್​ ಆಗಿದೆ. ಇದರಿಂದ ಪ್ರಯಾಣಿಕರಿಗೆ ಬಸ್​ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಅತಿ ಹೆಚ್ಚಿನ ಸಿಲಿಕಾನ್​​ ಸಿಟಿ ಮಂದಿ ಬಿಎಂಟಿಸಿ ಬಸ್​​ಗೆ ಅವಲಂಬಿತರಾಗಿದ್ದಾರೆ. ಹೋರಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಕ್ಷಮೆ ಕೋರುತ್ತಿದ್ದೇವೆಂದು ಬಿಎಂಟಿಸಿ ಸಿಬ್ಬಂದಿ ತಿಳಿಸಿದ್ದಾರೆ. ಆದ್ರೆ ನಮ್ಮ ಬೇಡಿಕೆ ಈಡೇರಲೇಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಸದ್ಯದ ವಾಸ್ತವ ಚಿತ್ರಣವನ್ನು ನಮ್ಮ ಪ್ರತಿನಿಧಿ ಭವ್ಯಾ ಶಿಬರೂರು ವಿವರಿಸಿದ್ದಾರೆ.

ABOUT THE AUTHOR

...view details