ಕರ್ನಾಟಕ

karnataka

By

Published : Feb 25, 2020, 6:06 PM IST

ETV Bharat / videos

ಸೆಡ್ಡು ಹೊಡೆದು ಕಬಡ್ಡಿ ಕಬಡ್ಡಿ ಅಂತಾ ಅಂಗಣಕ್ಕಿಳಿದ ಶಾಸಕ ರಾಜುಗೌಡ..

ಯಾದಗಿರಿ : ರಾಜಕೀಯ ಒಮ್ಮೊಮ್ಮೆ ತಲೆಚಿಟ್ಟು ಹಿಡಿಸಿರುತ್ತೆ. ಇದರಿಂದ ಹೊರ ಬರೋದಕ್ಕೆ ಒಂದಿಷ್ಟು ಅವಕಾಶ ಸಿಕ್ರೇ ಸಾಕು ಅಂತಿರ್ತಾರೆ ಜನಪ್ರತಿನಿಧಿಗಳು. ಬಿಜೆಪಿ ಶಾಸಕ ರಾಜುಗೌಡ ಕೂಡ ಕಬಡ್ಡಿ ಪಂದ್ಯ ಆಡಿ ಅಭಿಮಾನಿಗಳನ್ನ ರಂಜಿಸಿದರಲ್ಲದೇ ಒಂದಿಷ್ಟು ರಿಲ್ಯಾಕ್ಸ್ ಆದರು. ಸುರಪುರ ಪಟ್ಟಣದ ಲಕುಂಭಾರಪೇಟ್ ಬಡಾವಣೆಯ ಈಶ್ವರ ದೇವರ ಜಾತ್ರೆಯ ನಿಮಿತ್ತ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿದ ಬಳಿಕ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಶಾಸಕರು ಕಬಡ್ಡಿ ಆಡಿದರು. ಯುವಕರ ಜೊತೆ ಶಾಸಕ ರಾಜುಗೌಡರ ಕಬಡ್ಡಿ ಆಟ ನೋಡಿ ಅಲ್ಲಿ ನೆರೆದಿದ್ದ ಜನ ಶಿಳ್ಳೆ, ಚಪ್ಪಾಳೆ ಹಾಕಿದರು.

ABOUT THE AUTHOR

...view details