ಕರ್ನಾಟಕ

karnataka

ETV Bharat / videos

ಭಾರತ್ ಬಂದ್ ಬಿಸಿ: ಬೆಣ್ಣೆ ನಗರಿಯ ಹೂವಿನ ಮಾರ್ಕೆಟ್​ಲ್ಲಿ ವ್ಯಾಪಾರ ನೀರಸ - ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಪ್ರತಿಭಟನೆ

By

Published : Dec 8, 2020, 10:41 AM IST

ದಾವಣಗೆರೆ: ಜಿಲ್ಲೆಯಲ್ಲಿ ಭಾರತ್ ಬಂದ್ ಕಾವು ಹೆಚ್ಚಿದೆ. ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕರೆದಿರುವ ಬಂದ್​ಗೆ ಬೆಣ್ಣೆ ನಗರಿಯಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ಬೆಳಗ್ಗೆ 6 ರಿಂದ ಜಯದೇವವೃತ್ತದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ದಹಿಸುವ ಮೂಲಕ ಆರಂಭವಾದ ಪ್ರತಿಭಟನೆಯಲ್ಲಿ ಸಾಕಷ್ಟು ಜನ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಬಿಸಿ ಹೂವಿನ ಮಾರುಕಟ್ಟೆಗೆ ತಟ್ಟಿದ್ದು, ಹೂವು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ವ್ಯಾಪಾರಿಗಳು ಗ್ರಾಹಕರಿಲ್ಲದೆ ಕುಳಿತಿರುವ ದೃಶ್ಯಗಳು ಕಂಡು ಬರುತ್ತಿವೆ.

ABOUT THE AUTHOR

...view details