ಐಎಂಎ ದೋಖಾ ಎಫೆಕ್ಟ್: ಈ ಬಾರಿಯ ಬಕ್ರೀದ್ ಸಂಭ್ರಮಕ್ಕೆ ಪೆಟ್ಟು - ಐಎಂಎ ವಂಚನೆ ಪ್ರಕರಣ
ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲೊಂದು ಬಕ್ರೀದ್. ಇದು ತ್ಯಾಗ ಬಲಿದಾನದ ಸಂಕೇತ. ಈ ಬಕ್ರೀದ್ಗೆ ಇನ್ನು 6 ದಿನ ಮಾತ್ರ ಬಾಕಿ ಇದೆ. ವಾರಕ್ಕೂ ಮೊದಲೇ ಕುರಿ ಮೇಕೆಗಳೇನೋ ಮಾರುಕಟ್ಟೆಗೆ ಬಂದಿವೆ. ಆದರೆ, ಬೆಂಗಳೂರಿನಲ್ಲಿ ಈ ಬಾರಿಯ ಬಕ್ರೀದ್ ಸಂಭ್ರಮಕ್ಕೆ ಪೆಟ್ಟು ಉಂಟಾಗಿದೆ. ಇದಕ್ಕೆ ಕಾರಣವಾಗಿರೋದು ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ಮಾಡಿದ ವಂಚನೆ ಎನ್ನಲಾಗ್ತಿದೆ.