ಅನರ್ಹ ಶಾಸಕರ ಕ್ಷೇತ್ರಗಳಿಗೆ ಬಂಪರ್: ಬಿ ಸಿ ಪಾಟೀಲ್, ಬಣಕಾರರನ್ನು ಜೋಡೆತ್ತಿಗೆ ಹೋಲಿಸಿದ ಸಿಎಂ - ಯು ಬಿ ಬಣಕಾರ ಕುರಿತು ಯಡಿಯೂರಪ್ಪ ಹಾವೇರಿ ಹೇಳಿಕೆ ಸುದ್ದಿ
ಮೈತ್ರಿ ಸರ್ಕಾರ ಉರುಳಿಸಿ ಬಿಜಿಪಿ ಗದ್ದುಗೆ ಏರುವಂತೆ ಮಾಡಿದ ಅನರ್ಹ ಶಾಸಕರು, ಕಮಲ ಪಾಳಯದ ಪಾಲಿಕೆ ದೇವರಾಗಿದ್ದಾರೆ. ಸದ್ಯ ಅನರ್ಹರನ್ನು ಖುಷಿಪಡಿಸಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವಂತೆ ಮಾಡಲು ಸಿಎಂ ಬಿಎಸ್ವೈ ಪಣ ತೊಟ್ಟಿದ್ದು, ಅನರ್ಹರ ಕ್ಷೇತ್ರಗಳಿಗೆ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದಾರೆ. ಹಾವೇರಿ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಅನರ್ಹ ಶಾಸಕ ಬಿ. ಸಿ. ಪಾಟೀಲ್ ಮತ್ತು ಬಿಜೆಪಿ ಮಾಜಿ ಶಾಸಕ ಯು. ಬಿ. ಬಣಕಾರರನ್ನ ಜೋಡೆತ್ತುಗಳಿಗೆ ಹೋಲಿಸಿ ಅಟ್ಟಕ್ಕೇರಿಸಿದ್ದಾರೆ..