71ನೇ ಗಣರಾಜ್ಯೋತ್ಸವ : ಅಗ್ನಿ ಶಾಮಕದಳದಿಂದ ಅಣುಕು ಪ್ರದರ್ಶನ - republic day celeberation hospet
ಹೊಸಪೇಟೆ: 71 ನೇ ಗಣರಾಜ್ಯೋತ್ಸವದ ಅಂಗವಾಗಿ ಉಪ ವಿಭಾಗಾಧಿಕಾರಿ ಶೇಕ್ ಆಶಿಪ್ ತನ್ವೀರ್ ಧ್ವಜಾರೋಹಣ ನೇರವೇರಿಸಿದರು. ಧ್ವಜಾರೋಹಣದ ನಂತರ ಶಾಲಾ ಮಕ್ಕಳು, ಅಗ್ನಿಶಾಮಕ ಹಾಗೂ ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿ ಆಕರ್ಷಕ ಪಥ ಸಂಚಲನ ನಡೆಸಿದರು. ಬಳಿಕ ಗುಡಿಸಲು, ಅರಣ್ಯ, ಮನೆ, ಕಾರ್ಖಾನೆಗಳಿಗೆ ಬೆಂಕಿ ಬಿದ್ದಾಗ ಅದನ್ನು ಹೇಗೆ ನಂದಿಸುವುದು ಎಂದು ಅಗ್ನಿ ಶಾಮಕದಳದ ಸಿಬ್ಬಂದಿ ಅಣಕು ಪ್ರದರ್ಶನ ಮಾಡಿ ತೋರಿಸಿದರು.