ಕರ್ನಾಟಕ

karnataka

By

Published : Apr 21, 2020, 5:21 PM IST

ETV Bharat / videos

ಕೋಲಾರದಲ್ಲಿ ಪೌರಕಾರ್ಮಿಕನ ಮೇಲೆ ಹಲ್ಲೆ: ದೂರು ದಾಖಲು

ಪಾದರಾಯನಪುರ ಘಟನೆ ಬೆನ್ನಲ್ಲೇ ‌ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಘಟ‌ನೆ ನಗರದ 23 ನೇ ವಾರ್ಡ್​ನಲ್ಲಿ ನಡೆದಿದೆ. ಮುನಿಯಪ್ಪ ಹಲ್ಲೆಗೊಳಗಾಗಿರುವ ಪೌರ ಕಾರ್ಮಿಕ. ತನ್ನ ಮೇಲೆ 23ನೇ ವಾರ್ಡ್​ನ ನಗರಸಭಾ ಸದಸ್ಯೆಯ ಪತಿ ಸಾಧಿಕ್ ಪಾಷಾ ಎಂಬಾತ ಯುಜಿಡಿ ಕ್ಲೀನ್ ಮಾಡಲು ತಡವಾಗಿ ಹೋಗಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಕಾರ್ಮಿಕ ಆರೋಪಿಸಿದ್ದಾನೆ. ಈ ಪೌರ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಘಟ‌ನೆ ಸಂಬಂಧ ಕೋಲಾರ‌ ನಗರ ಪೊಲೀಸ್ ಠಾಣೆಗೆ ಪೌರ ಕಾರ್ಮಿಕ ಮುನಿಯಪ್ಪ ದೂರು ನೀಡಿದ್ದಾ‌ನೆ.

ABOUT THE AUTHOR

...view details