ಬಸ್ ಅಪಘಾತವಾಗುವ ಮುನ್ನವೇ ಎಚ್ಚರಿಕೆ ಗಂಟೆ.. ವಿದ್ಯಾರ್ಥಿನಿಯ ಆವಿಷ್ಕಾರ! - ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮ
ಬೆಂಗಳೂರು: ರಾಜ್ಯ ಸೇರಿ ದೇಶದಾದ್ಯಂತ ಅಪಘಾತ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿವೆ. ಈ ಅಪಘಾತಗಳನ್ನು ಹೇಗೆ ತಡೆಯಬಹುದು ಎಂಬುದನ್ನು ತಮ್ಮ ಪ್ರಯೋಗದ ಮೂಲಕ ವಿದ್ಯಾರ್ಥಿಯೊಬ್ಬಳು ತೋರಿಸಿದ್ದಾಳೆ. ನಗರದಲ್ಲಿ ನಡೆಯುತ್ತಿರುವ ಸೈನ್ಸ್ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಯೋಗ ನಡೆಸಿದ್ದು, ಸೆನ್ಸರ್ ಬಳಿಸಿ ಎಸಿ ವಾಹನಗಳಲ್ಲಿ ಆಗಬಹುದಾದ ಅಪಘಾತ ತಡೆಯಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದಾಳೆ. ತನ್ನ ಪ್ರಯೋಗದ ಕುರಿತು ವಿದ್ಯಾರ್ಥಿನಿ ಈಟಿವಿ ಭಾರತ್ ಪ್ರತಿನಿಧಿಯೊಂದಿಗೆ ಮಾತನಾಡಿದ್ದಾಳೆ.