ಕಾತ್ರಾಳ್ ಕೆರೆಗೆ ಕಂಠಕವಾದ ತೂಬು: ಅಪಾರ ಪ್ರಮಾಣದ ನೀರು ಪೋಲು - Path hole troubled for Kaatral lake in chitradurga
ಇದು ಬಹಳ ವರ್ಷಗಳಿಂದ ಹನಿ ನೀರಿಲ್ಲದೆ ಪಾಳು ಬಿದ್ದಿದ್ದ ಕೆರೆ. ಚಿತ್ರದುರ್ಗದಿಂದ ಕೂಗಳತೆ ದೂರದಲ್ಲಿರುವ ಈ ಕೆರೆಗೆ ಭದ್ರಾ ಜಲಾಶಯದಿಂದ ನೀರು ಹರಿಸಬೇಕೆಂದು ಆ ಭಾಗದ ರೈತರು ಬೀದಿಗಿಳಿದು ಪ್ರತಿಭಟನೆ ಮಾಡಿದ್ರೂ ಸರ್ಕಾರ ಮಾತ್ರ ಇತ್ತ ತಲೆಹಾಕಿ ಮಲಗಿರಲಿಲ್ಲ. ಆದ್ರೆ ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಕೆರೆಗೆ ನೀರು ಹರಿದು ಬಂದಿದೆ. ಇದರಿಂದ ರೈತರ ಮೊಗದಲ್ಲಿ ಮೂಡಿದ್ದ ಸಂತಸ ಕೆಲ ಗಂಟೆಗಳಲ್ಲಿ ಮರೆಯಾಗಿದೆ. ಅದಕ್ಕೆ ಕಾರಣ ಏನು ಅಂತಿರಾ?